ವಾಕ್ಯಗಳು

Share:
* ಕೆಲವು "ನಾಟಕ"ಗಳು ನಾಟಕ ಮುಗಿದ ನಂತರ ಅರ್ಥವಾಗುತ್ತವೆ.

* ವೇದಿಕೆಯ ಮೇಲಿದ್ದ ಗಣ್ಯರನ್ನು ಗಾಂಧಿವಾದಿ, ಸಮಾಜವಾದಿ, ಹಿಂದುವಾದಿ, ಮುಸ್ಲಿಂವಾದಿ, ಕಮ್ಯುನಿಸ್ಟ್ ವಾದಿ ಎಂದೆಲ್ಲ ಪರಿಚಯಿಸುತ್ತಿದ್ದ ನಿರೂಪಕನಿಗೆ ಅವರೆಲ್ಲರನ್ನೂ "ಅವಕಾಶವಾದಿ" ಎಂದು ಪರಿಚಯಿಸಲು ಧೈರ್ಯ ಸಾಲಲಿಲ್ಲ.

* ಸೀರೆಯಂಗಡಿಯಲ್ಲಿ ಬೊಂಬೆಗೆ ಸೀರೆಯುಡಿಸುವವನ ಕಂಡು ಅವಳು ಅರೆಕ್ಷಣ ಬೊಂಬೆಯಾದಳು.

* ಅಳುವ ಮಗುವನ್ನು ಕೈನಲ್ಲಿಡಿದುಕೊಂಡು "ಹುಚ್ಚಿ" ಗಹಿಗಹಿಸಿ ನಗುತ್ತಿದ್ದಳು.

* ಅವಳೊಂದು ದುರಂತಕಾವ್ಯ
.....................
.....................
...................
...................
ಬರೆಯುತ್ತಿದ್ದಳು.

No comments